Monday, 6 July 2015

ವಾಚನಾ ಸಪ್ತಾಹ 

ಶ್ರೀ  ವಿದ್ಯಾವರ್ಧಕ  ಹೈಯರ್ ಸೆಕೆಂಡರಿ  ಶಾಲೆಯಲ್ಲಿ  ವಾಚನಾ ಸಪ್ತಾಹವು ದಿನಾಂಕ ೧೯- ೬-೨೦೧೫ ವಿದಾರ್ಥಿಗಳಿಗೆ ಗ್ರಂಥಾಲಯದಿಂದ ಪುಸ್ತಕಗಳನ್ನು ನೀಡುವುದರೊಂದಿಗೆ  ಅಧ್ಯಾಪಕರಾದ  ಶ್ರೀಯುತ  ಶಿವಶಂಕರ ಭಟ್  ಉದ್ಘಾಟಿಸಿದರು . ಎಂ . ಎನ್  ಪಣಿಕ್ಕರ್ ಅವರ  ಸಾಧನೆಯ ಬಗ್ಗೆ  ಮತ್ತು ಇಂದಿನ ದಿನದ ಮಹತ್ವವನ್ನು ಸಂಸ್ಕೃತ ಅಧ್ಯಾಪಕರಾದ  ವಿಜಯ ಸರ್ ಅವರು ತಿಳಿಸಿದರು .  ಅಧ್ಯಾಪಿಕೆಯರಾದ ಲಲಿತ ಟೀಚರ್ ,ಸುಮನ ಟೀಚರ್ ,ಅನುಷ  ಟೀಚರ್ ಉಪಸ್ಥಿತರಿದ್ದರು   ಅಧ್ಯಾಪಕರಾದ    ರಾಜಾರಾಮ್  ರಾವ್  ಸ್ವಾಗತಿಸಿ  ಸಾವಿತ್ರಿ  ಟೀಚರ್ ವಂದಿಸಿದರು. ಕಾರ್ಯಕ್ರಮದಂಗವಾಗಿ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಓದಿನ ಟಿಪ್ಪಣಿಯನ್ನು ರಚಿಸಿ ಕ್ರಮವಾಗಿ ಸೌಮ್ಯ, ಮರಿಯಮ್ಮ ಹಾಗೂ ಶ್ರೀವಿದ್ಯಾ  ಪಿ  ಪ್ರಥಮ  ದ್ವಿತೀಯ ಮತ್ತು ತೃತೀಯ  ಬಹುಮಾನವನ್ನು  ಗಳಿಸಿಕೊಂಡರು .  

No comments:

Post a Comment

Popular Posts