ಭೂಮಿಗೆ ತಂದ ಜನ್ಮದಾತೆ
ಮಮತೆಯ ಅರ್ಥ ತಿಳಿಸಿದ ಮಾತೆ
ತಪ್ಪನು ತಿದ್ದಿ ಕಲಿಸಿದೆ ಬುದ್ಧಿ
ಮಕ್ಕಳೇ ನನ್ನ ಸರ್ವಸ್ವ ಎಂದೆ II
ನೀತಿ ಪಾಠ ಕಲಿಸಿದೆ ನೀನು
ನಿನ್ನಯ ಕರುಣೆಗೆ ಉತ್ತರ ಬಾನು
ಭೂಮಿಯ ತಾಳ್ಮೆ ನಿನ್ನಲ್ಲಿರಲು
ಸುಂದರ ನಮ್ಮಯ ನೆಮ್ಮದಿ ಬಾಳು II
ಕಷ್ಟವ ಸಹಿಸಿ ನೆಮ್ಮದಿ ತಂದೆ
ಬಾಳಿಗೆ ನೀನೆ ಆದರ್ಶವಾದೆ
ತಾಯಿಯ ಪ್ರೀತಿ ಆಕಾಶದಷ್ಟು
ಮುಟ್ಟಲು ಆಗದು ಕೈ ಚಾಚಿದಷ್ಟು II
ತಾಯಿಯ ಪ್ರೀತಿ ಬಣ್ಣಿಸಲಾಗದು
ಅವಳ ಮಹಿಮೆ ತಿಳಿಸಲಾಗದು
ಯಾವುದೆ ಸಮಯದಿ ಕೈ ಬಿಡದೆ
ಸೋತಾಗ ಗೆಲುವಿನ ದಾರಿ ತೋರಿದೆ II
ಎದ್ದರೂ ಬಿದ್ದರೂ ಜೊತೆಗಿದ್ದೆ ನೀನು
ಮಕ್ಕಳ ಪಾಲಿಗೆ ಆದೆ ಕಣ್ಣು
ದೇವರ ಸ್ವರೂಪವಾಗಿ ಬಂದೆ
ಪ್ರೀತಿಯ ಅರ್ಥವ ತಿಳಿಸುತ ನಿಂದೆ II
ಜಯಶ್ರೀ. ಕೆ
VIII ಬಿ ತರಗತಿ
ಶಾಲಾ ಯುವಜನೋತ್ಸವದಲ್ಲಿ ಪ್ರಥಮ ಬಹುಮಾನ ಗಳಿಸಿದ ಕವನ
ವಸುಂಧರೆಯ ಸೌಂದರ್ಯ ನೀ ಪ್ರಕೃತಿ
ಸೂರ್ಯನೊಬ್ಬನೇ ನಿನಗೆ ಹೊನ್ನಿನ ಮೂಗುತಿ
ಚಳಿ ಮಳೆ ಬಿಸಿಲ ಬೇಗೆಗೂ ನೀ ಸಾಗುತಿ
ನಿನಗಾರು ಸತಿ ಹೇಳೇ ಪ್ರಕೃತಿ
ಕಣ್ಣಂಚಿನಲ್ಲಿ ತುಂಬು ತಿದೆ ಹಸಿರು
ಇದುವೇ ಅಲ್ಲವೇ ಜೀವಜಾಲದ ಉಸಿರು
ನವರತ್ನಗಳ ಮಣಿ ಶೃಂಗಾರ
ನಿನ್ನ ಸೃಷ್ಟಿ ಯನು ಹೇಳುವ ಕವಿತೆ ಸುಮಧುರ ।।
ಎನ್ನ ಸಾಮರ್ಥ್ಯ ಸಾಲದಾಯಿತೆ ಪ್ರಕೃತಿ
ನಿನ್ನ ಗುಣಗಾನಕ್ಕೆ ಸಿಗದಾಯಿತೆ ಸ್ತುತಿ
ನಾನಿಂದು ಸೋತೆ ನಾನಿಂದು ಸೋತೆ
ನಿನ್ನ ಸೃಷ್ಟಿ ಸೌಂದರ್ಯಕೆ ಮನಸೋತೆ
ನಿನ್ನ ಸೌಂದರ್ಯವನು ಕೊಂಡಾಡಲಸಾಧ್ಯ
ಈ ಕವಿತೆ ನಿನ್ನ ಪದತಳಕ್ಕೆ ಸಮರ್ಪಿಸುವೆ
ನನ್ನ ತಪ್ಪನು ಮರೆತು ಸಲಹೆನ್ನ ಮಾತೆ
ಎಲ್ಲರನು ರಕ್ಷಿಸಲು ಮರೆಯದಿರು ತಾಯೆ
ಹೆತ್ತಬ್ಬೆಯ ಸ್ವರೂಪ ನಿನ್ನ ಮಮತೆ
ಆ ತಾಯಿಯು ನಾಚುವಳು ನಿನ್ನ ಪ್ರೀತಿಗೆ
ಮುಂಜಾನೆಯಲ್ಲಿ ನಗುವ ನೀರೆ
ನಿನಗಿದೋ ಹಸಿರ ಸೀರೆ
ಮುಸ್ಸಂಜೆಯ ಸೂರ್ಯ ನಮಸ್ಕಾರ
ಸರ್ವಸುರರಿಂದಲೂ ಪೂಜಿಸಲ್ಪಡುವುದು ನಿನ್ನ ಓಂಕಾರ
ವನ್ಯ ಜೀವಿಗಳೇ ನಿನಗೊಡವೆ
ದಿನದಿನವೂ ಧರಿಸಿ ಕಾಯುವೆ
ಭ್ರಮರವೇ ನಿನಗೆ ಅಲಂಕಾರ
ಹಕ್ಕಿಪಕ್ಕಿಗಳು ನೀನಾಡುವ ಸ್ವರವೇ ?
ನಿನಗಿದೋ ಮಂಗಳವಾಗಲಿ
ನಿನ್ನ ಹಸಿರ ರಂಗಿಗೊಂದು ಮೆರುಗಾಗಲಿ ಈ ಕವಿತೆ
ನದಿ ದೇವತೆ ನಿನ್ನ ಗೆಳತಿ ಓ ಅರಸಿ
ಸರ್ವರ ಜೀವನ ಸುಗಮಗೊಳಿಸು ನೀ ಹರಸಿ
No comments:
Post a Comment