ಶಾಲಾ ಪ್ರವೇಶೋತ್ಸವ ೨೦೧೬-೧೭
ಶ್ರೀ ವಿದ್ಯಾವರ್ಧಕ ಪ್ರೌ ಢ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳ ಪ್ರವೆಶೋತ್ಸವವು ಬಹಳ ಅದ್ದೂರಿಯಲ್ಲಿ ಜರಗಿತು .ತಾರೆ ಜಮೀನ್ಪರ್ ಚಲನ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು . ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ದಿನೇಶ್ ಅಮ್ಮೆನದ್ಕ ಹಾಗೂ ಉಪಾಧ್ಯಕ್ಷರಾದ ಅಮ್ಮೆನದ್ಕ ನಾರಾಯಣ ಭಟ್ ಉಪಸ್ಥಿತರಿದ್ದರು . ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಯಾದ ಡಾ। ಜಯಪ್ರಕಾಶ್ ನಾರಾಯಣ ರವರು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಿಶ್ಚಿತ ಉದ್ದೇಶ ಇರಬೇಕೆಂದು ಮುನ್ಸೂಚನೆಯನ್ನು ನೀಡಿದರು . ಮುಖ್ಯೋಪಾಧ್ಯಾಯರಾದ ಶ್ರೀ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಹಿರಿಯ ಅಧ್ಯಾಪಿಕೆ ಲಲಿತ ಟೀಚರ್ ವಂದಿಸಿದರು . ಆ ಬಳಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು .
No comments:
Post a Comment