Monday, 15 June 2015

ರಕ್ಷಕ ಶಿಕ್ಷಕ ಸಂಘ 

ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ  ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು  ತಾರೀಕು೧೨-೬-೨೦೧೫  ಶುಕ್ರವಾರ ದಂದು   ಶಾಲಾ ಸಭಾಭವನದಲ್ಲಿ ಜರಗಿತು . ಸಭೆಯ ಅಧ್ಯಕ್ಷತೆಯನ್ನುರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ  ಶ್ರೀ  ಜಗನ್ನಾಥ ಶೆಟ್ಟಿ ಅವರು ವಹಿಸಿದರು . ರಾಜಾರಾಮರಾವ್  ಪ್ರಾಸ್ತಾವಿಕ ನುಡಿದರು . ಶಾಲಾ ಮುಖ್ಯೋಪಾಧ್ಯಾಯರು ಪ್ರಸ್ತುತ  ಶೈಕ್ಷಣಿಕ ವರ್ಷದ ರೂಪುರೇಷೆಗಳ ಬಗ್ಗೆ ವಿವರ ನೀಡಿದರು . ಶಾಲಾ ಸಂಚಾಲಕ ಜಯಪ್ರಕಾಶ್ ನಾರಾಯಣ್   ಅವರು ಶಾಲಾ ಅಭಿವೃದ್ಧಿಯಲ್ಲಿ  ಹೆತ್ತವರ ಪಾತ್ರ ಮಹತ್ತರವಾದುದು ಈ ನಿಟ್ಟಿನಲ್ಲಿ 'ಶಾಲೆಯೊಂದಿಗೆ ನಿರಂತರವಾದ ಸಂಪರ್ಕವನ್ನಿರಿಸಬೇಕಾದುದು ಅನಿವಾರ್ಯವೆಂದರು. ಶಾಲಾ ಅಧ್ಯಾಪಿಕೆ ಅನುಷ ರವರು ಸ್ವಾಗತಿಸಿ ಅಧ್ಯಾಪಕರಾದ ಎಸ್ ಗೋಪಾಲಕೃಷ್ಣ ಭಟ್ ವಂದಿಸಿದರು 

No comments:

Post a Comment

Popular Posts