ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ತಾರೀಕು೧೨-೬-೨೦೧೫ ಶುಕ್ರವಾರ ದಂದು ಶಾಲಾ ಸಭಾಭವನದಲ್ಲಿ ಜರಗಿತು . ಸಭೆಯ ಅಧ್ಯಕ್ಷತೆಯನ್ನುರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಗನ್ನಾಥ ಶೆಟ್ಟಿ ಅವರು ವಹಿಸಿದರು . ರಾಜಾರಾಮರಾವ್ ಪ್ರಾಸ್ತಾವಿಕ ನುಡಿದರು . ಶಾಲಾ ಮುಖ್ಯೋಪಾಧ್ಯಾಯರು ಪ್ರಸ್ತುತ ಶೈಕ್ಷಣಿಕ ವರ್ಷದ ರೂಪುರೇಷೆಗಳ ಬಗ್ಗೆ ವಿವರ ನೀಡಿದರು . ಶಾಲಾ ಸಂಚಾಲಕ ಜಯಪ್ರಕಾಶ್ ನಾರಾಯಣ್ ಅವರು ಶಾಲಾ ಅಭಿವೃದ್ಧಿಯಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು ಈ ನಿಟ್ಟಿನಲ್ಲಿ 'ಶಾಲೆಯೊಂದಿಗೆ ನಿರಂತರವಾದ ಸಂಪರ್ಕವನ್ನಿರಿಸಬೇಕಾದುದು ಅನಿವಾರ್ಯವೆಂದರು. ಶಾಲಾ ಅಧ್ಯಾಪಿಕೆ ಅನುಷ ರವರು ಸ್ವಾಗತಿಸಿ ಅಧ್ಯಾಪಕರಾದ ಎಸ್ ಗೋಪಾಲಕೃಷ್ಣ ಭಟ್ ವಂದಿಸಿದರು
No comments:
Post a Comment