ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ೨೦೧೬-೧೭
ಶ್ರೀ ವಿದ್ಯಾವರ್ಧಕ ಹೈಸ್ಕೂಲ್ ನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ। ಜಯಪ್ರಕಾಶ್ ನಾರಾಯಣ್ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಯಸ್.ಗೋಪಾಲಕೃಷ್ಣ ಭಟ್ ಮಾತನಾಡಿ ಶಾಲಾ ಪ್ರಗತಿಯಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು ಎಂದರು. ಯಸ್ ಪಿ ಜೆ ಕನ್ವೀನರಾದ ಇಬ್ರಾಹಿಮ್ ಹೊನ್ನಕಟ್ಟೆ ಮತ್ತು ರಕ್ಷಕ-ಶಿಕ್ಷಕ ಸಂಘದ ನಿಕಟ ಪೂರ್ವ ಅದ್ಯಕ್ಷರಾದ ದಿನೇಶ್ ಅಮ್ಮೆನಡ್ಕ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಭ ಕೊರಿದರು. ಅಧ್ಯಾಪಕರಾದ ರಾಜಾ ರಾಮ್ ರಾವ್ ಪ್ರಾಸ್ತವಿಕ ನುಡಿದರು. ಲಲಿತ ಟೀಚರ್ ಸ್ವಾಗತಿಸಿ, ಅಧ್ಯಾಪಕರಾದ ಶಿವ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕೆ.ಯಸ್ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
No comments:
Post a Comment